ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ತಿರುಮಳಿಶೈ ಆಳ್ವಾರ್

ಆಂಡಾಳಜ್ಜಿ ವ್ಯಾಸ ಮತ್ತು ಪರಾಶರರಿಗೆ ಆಳ್ವಾರುಗಳ ಜೀವನ ಚರಿತ್ರೆ ಹೇಳುತ್ತಿದ್ದರು .

ವ್ಯಾಸ : ಅಜ್ಜಿ ನಾವು ಈಗ ಮುದಲಾಳ್ವಾರ್ಗಳ್ ಮತ್ತು ತಿರುಮಳಿಶೈ  ಆಳ್ವಾರ್ ಬಗ್ಗೆ ಕೇಳಿದ್ದೇವೆ. ಮುಂದಿನದು ಯಾರು ಅಜ್ಜಿ ?

ಆಂಡಾಳಜ್ಜಿ : ನಾನು ನಿಮಗೆ ನಮ್ಮಾಳ್ವಾರ್ , ಆಳ್ವಾರುಗಳಿಗೆಲ್ಲ ನಾಯಕರಾದವರು, ಅವರ ಬಗ್ಗೆ ಹೇಳುತ್ತೇನೆ ? ಮತ್ತು ಅವರ ಪ್ರಿಯ ಶಿಷ್ಯರಾದ ಮಧುರಕವಿ ಆಳ್ವಾರ್ ಬಗ್ಗೆ ಹೇಳುತ್ತೇನೆ.

ನಮ್ಮಾಳ್ವಾರ್ -ಆಳ್ವಾರ್ ತಿರುನಗರಿ , ಮಧುರಕವಿ ಆಳ್ವಾರ್ – ತಿರುಕ್ಕೋಲೂರ್

ಪರಾಶರ: ಸರಿ ಅಜ್ಜಿ .ಅವರ ಬಗ್ಗೆ ನಿಮ್ಮಿಂದ ಕೇಳಲು ಕಾತುರದಿಂದ ಇದ್ದೀವಿ .

ಆಂಡಾಳಜ್ಜಿ: ನಮ್ಮಾಳ್ವಾರ್ ಎಂದರೆ “ ನಮ್ಮಆಳ್ವಾರ್ “ ಎಂದು ತಮಿಳಿನಲ್ಲಿ ಅರ್ಥ . ಅವರಿಗೆ ಸ್ವತಃ ಪೆರುಮಾಳ್ ಈ ಪಟ್ಟ ಕೊಟ್ಟರು. ನಮ್ಮಾಳ್ವಾರ್

ವೈಶಾಖ ಮಾಸದ ವಿಶಾಖ ನಕ್ಷತ್ರದಂದು ಆಳ್ವಾರ್ ತಿರುನಗರಿಯಲ್ಲಿ ಜನಿಸಿದರು . ಅವರು ಸ್ಥಳೀಯ ರಾಜ / ನಿರ್ವಾಹಕರಾದ ಕಾರಿ ಮತ್ತು ಅವರ ಪತ್ನಿ ಉದಯನಂಗೈ ಅವರ ಮಗನಾಗಿ ಜನಿಸಿದರು. ಕಾರಿ ಮತ್ತು ಉದಯನಂಗೈ ಯಾವುದೇ ಮಕ್ಕಳನ್ನು ಹೊಂದಿರಲಿಲ್ಲ. ಆದ್ದರಿಂದ ಅವರು ಹೋಗಿ ಸಂತಾನಕ್ಕಾಗಿ ತಿರುಕ್ಕುರುಂಗುಡಿ ನಂಬಿಯನ್ನು ಪ್ರಾರ್ಥಿಸಿದರು. ಸ್ವತಃ ತಾನೇ ಅವರಿಗೆ ಮಗನಾಗಿ ಬರುವೆ ಎಂದು ನಂಬಿ ಆಶೀರ್ವದಿಸುತ್ತಾರೆ. ಕಾರಿ ಮತ್ತು ಉದಯನಂಗೈ ಆಳ್ವಾರ್ ತಿರುನಗರಿಗೆ ಹಿಂದಿರುಗುತ್ತಾರೆ ಮತ್ತು ಶೀಘ್ರದಲ್ಲೇ ಉದಯನಂಗೈ ಸುಂದರವಾದ ಮಗುವಿಗೆ ಜನ್ಮ ನೀಡುತ್ತಾರೆ .  ಅವರನ್ನು ಸ್ವತಃ ಪೆರುಮಾಳಿನ ಅಂಶವಾಗಿ ಮತ್ತು ಕೆಲವೊಮ್ಮೆ ವಿಶ್ವಕ್ಸೇನರ ಅಂಶವಾಗಿ ಪ್ರಶಂಸಿಸಲಾಗಿದೆ.

ವ್ಯಾಸ : ಓಹ್ ! ಚನ್ನಾಗಿದೆ. ಹಾಗಾದರೆ ಅವರು ಸ್ವತಃ ಪೆರುಮಾಳೆ ?

ಆಂಡಾಳಜ್ಜಿ : ಅವರ ವೈಭವಗಳನ್ನು ನೋಡಿದರೆ ಖಂಡಿತ ಹಾಗೆ ಹೇಳಬಹುದು. ಆದರೆ ನಮ್ಮ ಅಚಾರ್ಯರು ವಿವರಿಸಿದಂತೆ,ಅವರು ಈ ಜಗತ್ತಿನಲ್ಲಿ ಅನಾದಿ ಕಾಲದಿಂದಲೂ ಅಲೆದಾಡುವ ಜೀವಾತ್ಮರಲ್ಲಿ ಒಬ್ಬನೆಂದು ಮತ್ತು ಶ್ರೀಮನ್ನಾರಾಯಣರ  ಬೇಷರತ್ತಾದ ಅನುಗ್ರಹದಿಂದ ದೈವಿಕವಾಗಿ ಆಶೀರ್ವದಿಸಲ್ಪಟ್ಟರು ಎಂದು ಸ್ವತಃ ಘೋಷಿಸುತ್ತಾರೆ. ಆದ್ದರಿಂದ, ಅವರು ಪೆರುಮಾಳಿಂದ ವಿಶೇಷವಾಗಿ ಆಶೀರ್ವದಿಸಲ್ಪಟ್ಟ ಕೆಲವರು ಎಂದು ನಾವು ಒಪ್ಪಿಕೊಳ್ಳುತ್ತೇವೆ.

ಪರಾಶರ : ಹೌದು ಅಜ್ಜಿ , ಪೆರುಮಾಳ್ ಕೆಲವು ವ್ಯಕ್ತಿಗಳನ್ನು ಪೂರ್ಣ ಜ್ಞಾನದಿಂದ ಆಶೀರ್ವದಿಸುತ್ತಾರೆ  ಮತ್ತು ಅವರನ್ನು ಆಳ್ವಾರ್ಗಳನ್ನಾಗಿ ಮಾಡುತ್ತಾರೆ ಎಂದು ನೀವು ಆರಂಭದಲ್ಲಿ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ ಇದರಿಂದ ಅವರು ನಮ್ಮಲ್ಲಿ ಅನೇಕರನ್ನು ಪೆರುಮಾಳ್  ಕಡೆಗೆ ಕರೆತರುತ್ತಾರೆ.

ಆಂಡಾಳಜ್ಜಿ : ಅದು ನಿಜ ಪರಾಶರ. ಈ ವಿಷಯಗಳನ್ನು ನೀನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಂಡಿದ್ದೀಯ. ಈಗ ನಮ್ಮಾಳ್ವಾರ್ ಅವರ ಜನನದ ವಿಷಯಕ್ಕೆ ಹಿಂದಿರುಗೋಣ, ಅವರು ಸಾಧಾರಣ ಮಗುವಿನಂತೆ ಜನಿಸಿದರೂ , ಅವರು ತಿನ್ನಲಿಲ್ಲ, ಅಳಲಿಲ್ಲ ಅಥವಾ ಏನೂ ಮಾಡಲಿಲ್ಲ. ಅವರ ಪೋಷಕರು ಆರಂಭದಲ್ಲಿ ಚಿಂತಿತರಾಗಿದ್ದರು ಮತ್ತು ಹನ್ನೆರಡನೇ ದಿನ ಅವರನ್ನು ಆದಿನಾಥ ಪೆರುಮಾಳ್ ದೇವಾಲಯಕ್ಕೆ ತಂದು ಪೆರುಮಾಳಿನ ಮುಂದೆ ಇಟ್ಟರು. ಇತರ ಶಿಶುಗಳಿಂದ ಅವರ ವಿಶಿಷ್ಟ ಸ್ವಭಾವದಿಂದಾಗಿ, ಅವರಿಗೆ ಮಾರನ್ (ವಿಭಿನ್ನ ವ್ಯಕ್ತಿ) ಎಂಬ ಹೆಸರನ್ನು ನೀಡಲಾಯಿತು. ಅವನ ವಿಶಿಷ್ಟ ಸ್ವಭಾವವನ್ನು ನೋಡಿದ ಅವನ ಹೆತ್ತವರು ಅವನನ್ನು ದೈವಿಕ ವ್ಯಕ್ತಿತ್ವವೆಂದು ಪರಿಗಣಿಸಿ ದೇವಾಲಯದ ದಕ್ಷಿಣ ಭಾಗದಲ್ಲಿ ಇರುವ ದೈವಿಕ ಹುಣಸೆ ಮರದ ಕೆಳಗೆ ಇರಿಸಿ ಅವನನ್ನು ಬಹಳ ಗೌರವದಿಂದ ಪೂಜಿಸಿದರು. ಅಂದಿನಿಂದ ಅವರು ಹುಣಸೆ ಮರದ ಕೆಳಗೆ ಒಂದು ಮಾತನ್ನೂ ಮಾತನಾಡದೆ 16 ವರ್ಷಗಳ ಕಾಲ ಇದ್ದರು.

ವ್ಯಾಸ : ಆದ್ದರಿಂದ, ಅವರು ಏನು ಮಾಡುತ್ತಿದ್ದರು? ಮತ್ತು ಅವರು ಎಂದಾದರೂ ಮಾತನಾಡಿದ್ದಾರೆಯೇ?

ಆಂಡಾಳಜ್ಜಿ : ಹುಟ್ಟಿದ ಸಮಯದಲ್ಲಿ ಆಶೀರ್ವದಿಸಲ್ಪಟ್ಟ ಅವರು, ಸದಾ ಪೆರುಮಾಳ್  ಬಗ್ಗೆ ಆಳವಾದ ಧ್ಯಾನದಲ್ಲಿದ್ದರು. ಅಂತಿಮವಾಗಿ, ಮಧುರಕವಿ ಅಳ್ವಾರ್ ಅವರ ಆಗಮನವೇ ಅವರು ಮಾತನಾಡಲು ಕಾರಣವಾಯಿತು.

ಪರಾಶರ :  ಮಧುರಕವಿ ಆಳ್ವಾರ್ ಯಾರು ?ಅವರು ಏನು ಮಾಡಿದರು ?

ಆಂಡಾಳಜ್ಜಿ : ಮಧುರಕವಿ ಆಳ್ವಾರ್ ತಿರುಕ್ಕೋಲೂರ್ ನಲ್ಲಿ ಚೈತ್ರ ಮಾಸದ ಚಿತ್ತಾ ನಕ್ಷತ್ರದಂದು ಜನಿಸಿದರು. ಅವರು ಮಹಾನ್ ವಿದ್ವಾಂಸರು ಮತ್ತು ಶ್ರೀಮನ್ನಾರಾಯಣನ ಭಕ್ತರು. ಅವರು ನಮ್ಮಾಳ್ವಾರ್ ಗಿಂತ ಹಿರಿಯರು. ಅವರು ಅಯೋಧ್ಯೆಯಲ್ಲಿ ತೀರ್ಥಯಾತ್ರೆಯಲ್ಲಿದ್ದರು. ಈಗಾಗಲೇ ಆರು ಮಾರನ್ ಅವರ ಜೀವನದ ಬಗ್ಗೆ ಕೇಳಿದ್ದರು. ಆ ಸಮಯದಲ್ಲಿ, ಅವರು ದಕ್ಷಿಣ ದಿಕ್ಕಿನಿಂದ ಹೊಳೆಯುವ ಬೆಳಕನ್ನು ಗಮನಿಸಿ ಮತ್ತು ಅವರು ಆ ಬೆಳಕನ್ನು ಅನುಸರಿಸುತ್ತಾ ಅದು ಅಂತಿಮವಾಗಿ ಮಾರನ್ ತಂಗಿರುವ ಆಳ್ವಾರ್ ತಿರುನಗರಿ ದೇವಸ್ಥಾನಕ್ಕೆ ಕರೆದೊಯ್ಯುತ್ತದೆ.

ವ್ಯಾಸ : ನಮ್ಮಾಳ್ವಾರ್ ಮಧುರಕವಿ ಆಳ್ವಾರ್ ಜೊತೆ ಮಾತನಾಡಿದರೆ ?

ಆಂಡಾಳಜ್ಜಿ : ಹೌದು. ಮಧುರಕವಿ ಆಳ್ವಾರ್ ಅವರನ್ನು ದೈವಿಕ ಸಂಭಾಷಣೆಯಲ್ಲಿ ತೊಡಗಿಸುತ್ತಾರೆ ಮತ್ತು ಆಳ್ವಾರ್ ಅಂತಿಮವಾಗಿ ಮಾತನಾಡುತ್ತಾರೆ. ಅವರ ವೈಭವಗಳನ್ನು ತಿಳಿದು, ಮಧುರಕವಿ ಆಳ್ವಾರ್ ಅವರ ಶಿಷ್ಯರಾಗಿ ಕಲಿಯಬೇಕಾದ ಎಲ್ಲಾ ಅಗತ್ಯ ತತ್ವಗಳನ್ನು ಕಲಿಯುತ್ತಾರೆ. ಅವರು ನಮ್ಮಾಳ್ವಾರ್ ರಿಗೆ ಸೇವೆ ಸಲ್ಲಿಸುತ್ತಾ ಜೀವನ ಪರ್ಯಂತ ಅವರಿಗೆ ಕೈಂಕರ್ಯ ಮಾಡಿದರು.

ಪರಾಶರ : ಓಹ್, ಒಳ್ಳೆಯದು . ಹಾಗಾಗಿ, ನಿಜವಾದ ಜ್ಞಾನವನ್ನು ಕಲಿಯಲು ವಯಸ್ಸು ಮಾನದಂಡವಲ್ಲ ಎಂದು ತೋರುತ್ತದೆ. ಇಲ್ಲಿ, ಮಧುರಕವಿ ಆಳ್ವಾರ್ ನಮ್ಮಾಳ್ವಾರ್ಗಿಂತ ಹಿರಿಯರಾಗಿದ್ದರೂ, ಅವರು ಈ ತತ್ವಗಳನ್ನು ನಮ್ಮಾಳ್ವಾರರಿಂದ ಕಲಿತರು.

ಆಂಡಾಳಜ್ಜಿ :ಚೆನ್ನಾಗಿ ಗಮನಿಸಿದೆ ಪರಾಶರ . ಹೌದು, ಒಬ್ಬ ವ್ಯಕ್ತಿ ತನಗಿಂತ ಚಿಕ್ಕವನಾಗಿದ್ದರೂ ಯಾವುದೇ ಕಲಿತ ವ್ಯಕ್ತಿಯಿಂದ ಕಲಿಯಲು ವಿನಮ್ರನಾಗಿರಬೇಕು. ಅದು ಶ್ರೀವೈಷ್ಣವರ ನಿಜವಾದ ಗುಣವಾಗಿದೆ ಮತ್ತು ಇದನ್ನು ಮಧುರಕವಿ ಅಳ್ವಾರ್ ಇಲ್ಲಿ ಚೆನ್ನಾಗಿ ಪ್ರದರ್ಶಿಸಿದ್ದಾರೆ. ಕೆಲವು ವರ್ಷಗಳ ನಂತರ, ತನ್ನ 32 ನೇ ವಯಸ್ಸಿನಲ್ಲಿ, ನಮ್ಮಾಳ್ವಾರ್ ಅವರು ಇನ್ನು ಮುಂದೆ ಪೆರುಮಾಳ್ನಿಂದ ಬೇರ್ಪಡಿಸುವುದನ್ನು ಸಹಿಸಲಾಗದ ಕಾರಣ ಪರಮಪದಂಗೆ ಏರಲು ನಿರ್ಧರಿಸುತ್ತಾರೆ. ಪೆರುಮಾಳಿನ ವೈಭವವನ್ನು ಅವರ ನಾಲ್ಕು ಪ್ರಬಂಧಗಳಲ್ಲಿ ತಿರುವಿರುತ್ತಮ್ ,ತಿರುವಾಸಿರಿಯಂ , ಪೆರಿಯ ತಿರುವಂದಾದಿ ಮತ್ತು ತಿರುವಾಯ್ಮೊಳಿ ಹಾಡಿದ ನಂತರ, ಅವರು ಪೆರುಮಾಳ ಅನುಗ್ರಹದಿಂದ ಪರಮಪದಂಗೆ ಏರಿ ಅಲ್ಲಿ ಶಾಶ್ವತ ಕೈಂಕರ್ಯದಲ್ಲಿ ತೊಡಗುತ್ತಾರೆ.

ವ್ಯಾಸ : ಪರಮಪದಕ್ಕೆ ಹೋಗಲು ಅದು ಬಹಳ ಚಿಕ್ಕ ವಯಸ್ಸು ಅಜ್ಜಿ.

ಆಂಡಾಳಜ್ಜಿ : ಹೌದು. ಆದರೆ ಅವರು ಶಾಶ್ವತವಾಗಿ ಆನಂದಮಯವಾಗಿರಲು ಬಯಸಿದ್ದರು.ಮತ್ತು ಅವರು ಅಲ್ಲಿರಲು ಪೆರುಮಾಳ್ ಇಚ್ಚಿಸಿದರು. ಆದರಿಂದ ಅವರು ಈ ಜಗತನ್ನು ಬಿಟ್ಟು ಅಲ್ಲಿಗೆ ತಲುಪಿದರು. ಮಧುರಕವಿ ಅಳ್ವಾರ್ ನಂತರ ನಮ್ಮಾಳ್ವಾರ್ನ್ ಆರ್ಚಾ  ವಿಗ್ರಹವನ್ನು ಸ್ಥಾಪಿಸಿದರು, ಇದನ್ನು ನದಿಯ ನೀರನ್ನು ಕುದಿಸಿ ಸ್ವೀಕರಿಸಲಾಯಿತು ಮತ್ತು ಈ ಧಿವ್ಯ ದೇಶಂನಲ್ಲಿ ನಮ್ಮಾಳ್ವಾರ್ ಅವರ ಸರಿಯಾದ ಪೂಜೆಗೆ ವ್ಯವಸ್ಥೆ ಮಾಡಿದರು.ಅವರು ನಮ್ಮಾಳ್ವಾರ್ ರ ಸಂಪೂರ್ಣ ವೈಭವೀಕರಣದಲ್ಲಿ “ಕಣ್ಣಿನುನ್ ಚಿರುತ್ತಾಂಬು” ಎಂಬ ಹೆಸರಿನ ಪ್ರಬಂಧವನ್ನು ರಚಿಸಿದರು. ಅವರು ನಮ್ಮಾಳ್ವಾರ್ನ  ವೈಭವವನ್ನು ಎಲ್ಲೆಡೆಯೂ ಹರಡಿದರು ಮತ್ತು ನಮ್ಮಾಳ್ವಾರ್ ಅವರ ಶ್ರೇಷ್ಠತೆಯನ್ನು ಈ ಪ್ರದೇಶದಾದ್ಯಂತ ಸ್ಥಾಪಿಸಿದರು.

ಪರಾಶರ : ಆದ್ದರಿಂದ, ಮಧುರಕವಿ ಆಳ್ವಾರ್ ಕಾರಣ ನಾವು ನಮ್ಮಾಳ್ವಾರ್ ಅವರ ವೈಭವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ.

ಆಂಡಾಳಜ್ಜಿ : ಹೌದು. ಅವರು ಸಂಪೂರ್ಣವಾಗಿ ನಮ್ಮಾಳ್ವಾರ್ಗೆ  ಸಮರ್ಪಿತರಾಗಿದ್ದರು ಮತ್ತು ನಮ್ಮಾಳ್ವಾರ್ ಅವರ ಸಮರ್ಪಣೆಯಿಂದಾಗಿ ಅವರು ಸ್ವತಃ ವೈಭವೀಕರಿಸಲ್ಪಟ್ಟರು. ನೋಡಿ, ಪೆರುಮಾಳ್ ನ ಭಕ್ತರು ಪೆರುಮಾಳ್ ಗಿಂತ ಹೆಚ್ಚು ವೈಭವೀಕರಿಸಿದ್ದಾರೆ. ಆದ್ದರಿಂದ, ಪೆರುಮಾಳಿನ ಭಕ್ತರ ವೈಭವೀಕರಣವನ್ನು ಪೆರುಮಾಳನ್ನು ವೈಭವೀಕರಿಸುವುದಕ್ಕಿಂತ ಹೆಚ್ಚಿನದಾಗಿದೆ. ನಾವೂ ಸಾಧ್ಯವಾದಾಗಲೆಲ್ಲಾ ಪೆರುಮಾಳ್  ಭಕ್ತರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸಬೇಕು.

ವ್ಯಾಸ ಮತ್ತು ಪರಾಶರ : ಖಂಡಿತವಾಗಿ ಅಜ್ಜಿ . ನಾವು ಆ ಮನಸ್ಸನ್ನು ಇಟ್ಟುಕೊಳ್ಳುತ್ತೇವೆ ಮತ್ತು ಅಂತಹ ಅವಕಾಶಗಳನ್ನು ಎದುರು ನೋಡುತ್ತೇವೆ.

ಆಂಡಾಳಜ್ಜಿ : ಇದರೊಂದಿಗೆ ನಾವು ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್ ಅವರ ಜೀವನವನ್ನು ನೋಡಿದ್ದೇವೆ. ನಾವು ನಮ್ಮಾಳ್ವಾರ್ ಸನ್ನಿಧಿಗೆ  ಹೋಗಿ ಆತನನ್ನು ಪ್ರಾರ್ಥಿಸೋಣ  .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/11/beginners-guide-nammazhwar-and-madhurakavi-azhwar/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

1 thought on “ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್”

Leave a Comment