ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
![](http://3.bp.blogspot.com/-toaPp41dRHQ/UpFGSuXG6ZI/AAAAAAAAFwo/aGujY6e2Fyc/s1600/thiruvaradhanam.png)
ಪರಾಶರ,ವ್ಯಾಸ , ವೇದವಲ್ಲಿ ಮತ್ತು ಅತ್ತುಳಾಯ್ ಆಂಡಾಳ ಅಜ್ಜಿ ಮನೆಗೆ ಬರುತ್ತಾರೆ .
ಅಜ್ಜಿ : ಬನ್ನಿ ಮಕ್ಕಳೆ. ನಿಮ ಕೈ ಕಾಲು ತೊಳೆಯಿರಿ, ನಾನು ಪೇರುಮಾಳಿಗೆ ಅರ್ಪಿಸಿದ ಹಣ್ಣುಗಳನ್ನು ನಿಮಗೆ ಕೊಡುತ್ತೇನೆ. ನೀವು ಆಳವಂಧಾರರ ತಿರುನಕ್ಷತ್ರಂ ಆಚರಿಸಿದಿರೆ ?
ಪರಾಶರ: ಹೌದು, ಚೆನ್ನಗಿ ಆಚರಿಸಿದೆವು. ಆಳವಂಧಾರರ ಸನ್ನಿಧಿಯಲ್ಲಿ ಚೆನ್ನಾಗಿ ದರ್ಶನವಾಯಿತು. ಅಲ್ಲಿ ಭರ್ಜರಿಯಾಗಿ ಆಚರಿಸಿದರು. ನಮ್ಮ ತಂದೆ ಆಳವಂಧಾರರ ವಾಳಿ ತಿರುನಾಮಂ ಕಳಿಸಿದರು ಮತ್ತು ನಾವು ಅದನ್ನು ಮನೆಯಲ್ಲಿ ಪಠಿಸಿದೆವು .
ಅಜ್ಜಿ : ಬಹಳ ಸಂತೋಷ
ವೇದವಲ್ಲಿ : ಕಳೆದ ಬಾರಿ ನೀವು ಕೈಂಕರ್ಯಂನ ಮಹತ್ವವನ್ನು ತಿಳಿಸುವಿರಿ ಎಂದು ಹೇಳಿದ್ದೀರಿ. ಅದು ನಿಮಗೆ ನೆನಪಿದೆಯೇ?
ಅಜ್ಜಿ : ಹೌದು ನನಗೆ ನೆನಪಿದೆ. ನೀವು ನೆನಪಿಸಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನೀವು ಇದನ್ನು ಕೇಳಿದ್ದೀರಿ.ಕೈಂಕರ್ಯಂ ಎಂದರೆ ಎಂಪೆರುಮಾನ್ ಮತ್ತು ಅವರ ಭಕ್ತರಿಗೆ ಸೇವೆ ಸಲ್ಲಿಸುವುದು . ನಮ್ಮ ಕೈಂಕರ್ಯಂ ಎಂಪೆರುಮಾನ್ ಅನ್ನು ಸಂತೋಷಪಡಿಸಬೇಕು.
ವ್ಯಾಸ : ಎಂಪೆರುಮಾನ್ ಸಂತೋಷವಾಗಿದ್ದರೆ ನಾವು ಅವನಿಗೆ ಕೈಂಕರ್ಯಂಗಳನ್ನು ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ನಾವು ಕೈಂಕರ್ಯಂಗಳು ಹೇಗೆ ಮಾಡಬಹುದು?
ಅಜ್ಜಿ : ನಾವು ಕೈಂಕರ್ಯಂ ಅನ್ನು ನಮ್ಮ ಹೃದಯದಿಂದ ಮಾಡಬಹುದು (ಮಾನಸೀಕ ಕೈಂಕರ್ಯಂ ), ನಮ್ಮ ಮಾತುಗಳು (ವಾಚಿಕ ಕೈಂಕರ್ಯಂ) ಮತ್ತು ನಮ್ಮ ದೇಹದೊಂದಿಗೆ (ಶರೀರ ಕೈಂಕರ್ಯಂ). ಆಂಡಾಳ್ ನಾಚ್ಚಿಯಾರ್ ಕೂಡ ಅದೇ ಹೇಳಿದರು ನಾವು ಅವರ ವೈಭವವನ್ನು ಹಾಡಬಹುದು, ಅವನ ಬಗ್ಗೆ ಯೋಚಿಸಬಹುದು ಮತ್ತು ಅರ್ಪಿಸಬಹುದು ಎಂದು ಅವಳ ತಿರುಪ್ಪಾವೈ 5 ನೇ ಪಾಸುರಂನಲ್ಲಿ ಹೂವುಗಳು ಅರ್ಪಿಸಲು ಹೇಳಿದಳು . ಈ ಮೂಲಕ ನಾವು ಅವನ ಹೃದಯವನ್ನು ಮೆಚ್ಚಿಸಬಹುದು. ಎಂಪೆರುಮಾನಿನ ದೈವಿಕ ಗುಣಗಳ ಬಗ್ಗೆ ಯೋಚಿಸುವುದು ಮಾನಸೀಕ ಕೈಂಕರ್ಯಂ ಅಡಿಯಲ್ಲಿ ಬರುತ್ತದೆ. ಅವರ ದೈವಿಕ ವೈಭವವನ್ನು ಹೊಗಳುವುದು / ಹಾಡುವುದು ಮತ್ತು ಎಂಪೆರುಮಾನ್ ಮತ್ತು ಅವರ ಭಕ್ತರ ಶ್ರೇಷ್ಠತೆಯ ಬಗ್ಗೆ ಮಾತನಾಡುವುದು, ಮುಖ್ಯವಾಗಿ, ಆಳ್ವಾರ್ ಅವರ ಸ್ತುತಿಗೀತೆಗಳನ್ನು ಮತ್ತು ಪೂರ್ವಾಚಾರ್ಯರ ಸ್ತೋತ್ರಮ್ಗಳನ್ನು ಪಠಿಸುವುದರಿಂದ ಎಂಪೆರುಮಾನ್ ಗೆ ಬಹಳ ಸಂತೋಷವನ್ನುಂಟುಮಾಡುತ್ತದೆ. ಈ ಕೈಂಕರ್ಯಂಗಳು ವಾಚಿಕಾ ಕೈಂಕರ್ಯಂ ಅಡಿಯಲ್ಲಿ ಬರುತ್ತವೆ. ಎಂಪೆರುಮಾನ್ ನ ದೇವಾಲಯದ ಆವರಣ / ಸನ್ನಿಧಿಯನ್ನು ಸ್ವಚ್ಛ ಗೊಳಿಸುವುದು, ರಂಗೋಲಿಗಳನ್ನು (ಸುಂದರವಾದ ಆಕಾರಗಳು) ಚಿತ್ರಿಸುವ ಮೂಲಕ ತನ್ನ ಆವರಣವನ್ನು / ಸನ್ನಿಧಿಯನ್ನು ಅಲಂಕರಿಸುವುದು, ಹೂಮಾಲೆಗಳನ್ನು ತಯಾರಿಸುವ ಮೂಲಕ, ಅವನ ತಿರುವಾರಾಧನಕ್ಕೆ ಗಂಧದ ಲೇಪವನ್ನು ರುಬ್ಬುವ ಮೂಲಕ ಶರೀರ ಕೈಂಕರ್ಯಂ ಅಡಿಯಲ್ಲಿ ಬರುತ್ತದೆ. ಮೊದಲಿಗೆ, ನಮ್ಮ ಮನೆಗಳಲ್ಲಿ ಎಂಪೆರುಮಾನ್ ಗೆ ನಾಮಮಿನ್ ಸಾಧ್ಯವಾದ ಕೈಂಕರ್ಯಂಗಳನ್ನು ಮಾಡಬೇಕು . ನಿಮ್ಮಂತಹ ಮಕ್ಕಳು ನಿರ್ವಹಿಸುವ ಕೈಂಕರ್ಯಂ ಅನ್ನು ಸಂತೋಷದಿಂದ ಸ್ವೀಕರಿಸುತ್ತಾರೆ.
ಪರಾಶರ : ನೀವು ಇದನ್ನು ಚೆನ್ನಾಗಿ ವಿವರಿಸಿದ್ದೀರಿ ಅಜ್ಜಿ . ನಮ್ಮ ಮನೆಯಲ್ಲಿ ನಮ್ಮ ತಂದೆ ಮಾಡುವ ತಿರುವಾರಾಧನದಲ್ಲಿ ನಾವು ಸಂತೋಷದಿಂದ ಭಾಗವಹಿಸುತ್ತೇವೆ.
ಅಜ್ಜಿ: ಬಹಳ ಸಂತೋಷ
ಅತ್ತುಳಾಯ್ : ನಾನು ಮತ್ತು ವೇದವಲ್ಲಿ ರಂಗೋಲಿ ಮತ್ತು ಹೂವಿನ ಮಾಲೆ ತಯಾರಿಸುವ ಕೈಂಕರ್ಯ ಮಾಡುತ್ತೇವೆ.
![](https://pillai.koyil.org/wp-content/uploads/2014/11/nammazhwar-madhurakavi.jpg)
ಅಜ್ಜಿ : ಮತ್ತೊಂದು ಪ್ರಮುಖ ಅಂಶವೆಂದರೆ, ಎಂಪೆರುಮಾನ್ ಗೆ ಕೈಂಕರ್ಯಂಗಳನ್ನು ಮಾಡುವುದಕ್ಕಿಂತ ಎಂಪೆರುಮಾನ್ ನ ಅಡಿಯಾರ್ ಗಳಿಗೆ (ಭಕ್ತರು) ಕೈಂಕರ್ಯಂಗಳನ್ನು ಮಾಡುವುದು ಹೆಚ್ಚು ಮುಖ್ಯವಾಗಿದೆ. ಉದಾಹರಣೆ, ಲಕ್ಷ್ಮಣನು ಎಲ್ಲಾ ಕೈಂಕರ್ಯಗಳನ್ನು ಎಂಪೆರುಮಾನ್ಗೆ ಮಾಡಿದನು ಆದರೆ ಶತ್ರುಘ್ನ ಅವರು ಶ್ರೀ ರಾಮ ಅವರ ಆತ್ಮೀಯ ಸಹೋದರ ಮತ್ತು ಭಕ್ತ ಭರತನಿಗೆ ಕೈಂಕರ್ಯಗಳನ್ನು ಮಾಡಿದರು. ಅಲ್ಲದೆ, ನಮ್ಮಾಳ್ವಾರ್ ತನ್ನ ಪ್ರಿಯ ಕೃಷ್ಣನನ್ನು ತನ್ನ ಆಹಾರ, ನೀರು ಮತ್ತು ಅಡಿಕೆ ಎಲೆಗಳು / ಬೀಜಗಳು ಎಂದು ಪರಿಗಣಿಸಿದನು, ಆದರೆ ಮಧುರಕವಿ ಆಳ್ವಾರ್ ಅವರು ನಮ್ಮಾಳ್ವಾರ್ ಅವರನ್ನು ತಮ್ಮ ಏಕೈಕ ಭಗವಂತ ಎಂದು ಪರಿಗಣಿಸಿದರು. ಇದು ಎಂಪೆರುಮಾನ್ ನ ಅಡಿಯಾರ್ಗಳ ಶ್ರೇಷ್ಠತೆಯನ್ನು ಒತ್ತಿಹೇಳುತ್ತದೆ. ಆದ್ದರಿಂದ, ನಾವು ಯಾವಾಗಲೂ ಎಂಪೆರುಮಾನ್ ಆಡಿಯಾರ್ಗಳ ಭಕ್ತರಾಗಿರಬೇಕು.
ಅತ್ತುಳಾಯ್ : ನೀವು ಹೇಳಿದಂತೆ ಖಂಡಿತವಾಗಿ ಎಂಪೆರುಮಾನಿನ ಅಡಿಯಾರಗಳಿಗೆ ಕೈಂಕರ್ಯ ಮಾಡುವುದನ್ನು ನಾನು ಪರಿಗಣಿಸುತ್ತೇನೆ. ಆದರೆ ಭಕ್ತರಿಗೆ ಹೇಗೇ ಸೇವೆ ಮಾಡಬಹುದು ಅಜ್ಜಿ ?
ಅಜ್ಜಿ : ಭಕ್ತರು ನಮ್ಮ ಮನೆಗಳಿಗೆ ಭೇಟಿ ನೀಡಿದಾಗ, ನಾವು ಅವರಿಗೆ ನಮಸ್ಕಾರಗಳನ್ನು ಅರ್ಪಿಸಬೇಕು ಮತ್ತು ಅವರಿಗೆ ಹಿತಕರವಾಗಬೇಕು. ನಾವು ಅವರಿಗೆ ಅಗತ್ಯವಿರುವಂತೆ ಸಹಾಯ ಮಾಡಬೇಕು. ನಾವು ಅವರಿಂದ ಎಂಪೇರುಮಾನ್, ಆಳ್ವಾರ್ ಮತ್ತು ಅಚಾರ್ಯರ ಬಗ್ಗೆ ಅದ್ಭುತವಾದ ಚರಿತ್ರೆ ಗಳನ್ನು ವಿಚಾರಿಸಬೇಕು ಮತ್ತು ಅವರಿಂದ ಸಾಧ್ಯವಾದಷ್ಟು ಕಲಿಯಲು ಪ್ರಯತ್ನಿಸಬೇಕು. ಅವರ ಕೈಂಕರ್ಯಗಳಲ್ಲಿ ಅವರಿಗೆ ಏನಾದರೂ ಸಹಾಯ ಬೇಕಾ ಎಂದು ನಾವು ವಿನಮ್ರವಾಗಿ ಕೇಳಬೇಕು ಮತ್ತು ಅವರನ್ನು ಬೆಂಬಲಿಸಬೇಕು. ಭಕ್ತರಿಗಾಗಿ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಂತಹ ಹಲವು ಮಾರ್ಗಗಳಿವೆ.
ಅತ್ತುಳಾಯ್ : ಈಗ ಅರ್ಥವಾಯಿತು ಅಜ್ಜಿ ನಾವು ಅಂತಹ ಸನ್ನಿವೇಶಕ್ಕೆ ಸದಾ ತಯಾರಾಗಿ ಇರುತ್ತೇವೆ.
(ಎಲ್ಲರೂ ಒಂದೇ ಕೊರಳಿನಲ್ಲಿ “ಹೌದು” ಎನ್ನುತ್ತಾರೆ )
ಅಜ್ಜಿ : ಬಹಳ ಸಂತೋಷ ಮಕ್ಕಳೆ
ವೇದವಲ್ಲಿ : ನಿಮ್ಮ ಮಾತುಗಳು ಕೇಳಲು ಬಹಳ ಚೆನ್ನಾಗಿದೆ ಅಜ್ಜಿ . ಇನ್ನಷ್ಟು ಹೇಳಿ.
ಅಜ್ಜಿ : ಹೆಚ್ಚಿನದನ್ನು ವಿವರಿಸಲು ನನಗೆ ತುಂಬಾ ಸಂತೋಷವಾಗುತ್ತದೆ ಆದರೆ ಈಗ ಅದು ಹೊರಗೆ ತುಂಬಾ ಕತ್ತಲೆಯಾಗುತ್ತಿದೆ. ಮುಂದಿನ ಬಾರಿ, ನಾವು ಇನ್ನೊಂದು ವಿಷಯವನ್ನು ಚರ್ಚಿಸುತ್ತೇವೆ. ಈಗ, ನೀವೆಲ್ಲರೂ ನಿಮ್ಮ ಮನೆಗಳಿಗೆ ಹೋಗಬೇಕು.
ಮಕ್ಕಳು ಆಂಡಾಲ್ ಅಜ್ಜಿ ಯೊಂದಿಗೆ ನಡೆಸಿದ ಅದ್ಭುತ ಸಂಭಾಷಣೆಯ ಬಗ್ಗೆ ಯೋಚಿಸುತ್ತಾ ಸಂತೋಷದಿಂದ ತಮ್ಮ ಮನೆಗಳಿಗೆ ತೆರಳುತ್ತಾರೆ.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : http://pillai.koyil.org/index.php/2018/10/beginners-guide-kainkaryam/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org