ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್ ಶಿಷ್ಯರು ಭಾಗ 1

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌

ಪೂರ್ಣ‌ ‌ಸರಣಿ‌

ಪೆರಿಯ ನಂಬಿ

ತಿರುವರಂಗಪ್ಪೆರುಮಾಳ್ ಅರೈಯರ್ ,ಪೆರಿಯ ತಿರುಮಲೈ ನಂಬಿ ಮತ್ತು ತಿರುಮಾಲೈ ಆಂಡಾನ್

ಆಳವಂದಾರ್ ಅವರ ಶಿಷ್ಯರು

ಪರಾಶರ ಮತ್ತು ವ್ಯಾಸ ತಮ್ಮ ಸ್ನೇಹಿತೆ  ವೇದವಲ್ಲಿ ಅವರೊಂದಿಗೆ ಆಂಡಾಳಜ್ಜಿ ಅವರ ಮನೆಗೆ ಪ್ರವೇಶಿಸುತ್ತಾರೆ.

ಅಜ್ಜಿ: ಸ್ವಾಗತ ವೇದವಲ್ಲಿ. ಬನ್ನಿ ಮಕ್ಕಳೆ

ವ್ಯಾಸ: ಅಜ್ಜಿ, ಕೊನೆಯ ಬಾರಿ ನೀವು ರಾಮಾನುಜರ್ ಮತ್ತು ಅವರ ಆಚಾರ್ಯರ ಬಗ್ಗೆ ಇನ್ನಷ್ಟು ತಿಳಿಸುವಿರಿ ಎಂದು ಹೇಳಿದ್ದೀರಿ.

ಪರಾಶರ: ಅಜ್ಜಿ, ರಾಮಾನುಜರ್ಗೆ ಕೇವಲ ಪೆರಿಯನಂಬಿ ಅಲ್ಲದೆ ಅನೇಕ ಆಚಾರ್ಯರು ಇದ್ದರು ಎಂದು ನೀವು ಹೇಳಿದ್ದಿರಿ ಅಲ್ಲವೇ? ಅಜ್ಜಿ ಇತರರು ಯಾರು?

ಅಜ್ಜಿ: ಕಳೆದ ಬಾರಿ ನಾನು ನಿಮಗೆ ಹೇಳಿದಂತೆ, ಆಳವಂದಾರ್ ಅವರು ಅನೇಕ ಶಿಷ್ಯರನ್ನು ಹೊಂದಿದ್ದರು, ಅವರು ಇಳೈಯಾಳ್ವಾರ್ ಅವರನ್ನು ಸಂಪ್ರದಾಯಕ್ಕೆ ಪೋಷಿಸುವತ್ತ ಕೆಲಸ ಮಾಡಿದರು. ಪ್ರಮುಖವಾದವರು: – 1) ತಿರುವರಂಗಪ್ಪೆರುಮಾಳ್ ಅರೈಯರ್ 2) ತಿರುಕ್ಕೋಷ್ಟಿಯೂರ್ ನಂಬಿ 3) ಪೆರಿಯ ತಿರುಮಲೈ ನಂಬಿ 4) ತಿರುಮಾಲೈ ಆಂಡಾನ್ 5) ತಿರುಕ್ಕಚ್ಚಿ ನಂಬಿ ಜೊತೆಗೆ ಪೆರಿಯ ನಂಬಿ. ನಾವು ಕೊನೆಯ ಬಾರಿ ಭೇಟಿಯಾದಾಗ ನಾವು ಪೆರಿಯ ನಂಬಿಯ ಬಗ್ಗೆ ಮಾತನಾಡಿದ್ದೇವೆಂದು ನಿಮಗೆ ನೆನಪಿದೆಯೇ? ಈಗ, ಇತರ ಆಚಾರ್ಯರ ಬಗ್ಗೆ ಮತ್ತು ನಮ್ಮ ಸಂಪ್ರದಾಯಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಬಗ್ಗೆ ಹೇಳುತ್ತೇನೆ.

ಪರಾಶರ: ಅಜ್ಜಿ, ರಾಮಾನುಜರ್ಗೆ ಯಾಕೆ ಹಲವು ಅಚಾರ್ಯರು ಇದ್ದರು?

ಅಜ್ಜಿ: ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಶ್ರೀ ರಾಮಾನುಜರ್ ಅವರನ್ನು ಮಹದಾಚಾರ್ಯರನ್ನಾಗಿ ರೂಪಿಸಿದರು. ರಾಮಾನುಜರ್ ಅವರನ್ನು ಕಾಂಚೀಪುರಂನಿಂದ ಶ್ರೀರಂಗಕ್ಕೆ ಕರೆತರುವ ಮಹಾನ್ ಕೈಂಕರ್ಯಂ ಅನ್ನು ತಿರುವರಂಗಪ್ಪೆರುಮಾಳ್ ಅರೈಯರ್ ಮಾಡಿದರು.

ವ್ಯಾಸ: ಅದು ಹೇಗೆ ಸಂಭವಿಸಿತು? ಕಥೆ  ಹೇಳಿ ಅಜ್ಜಿ.

ಅಜ್ಜಿ: ರಾಮಾನುಜರು ಆಗ ಕಾಂಚೀಪುರಂ ನಲ್ಲಿ ವಾಸಿಸುತ್ತಿದ್ದರು ಮತ್ತು ಸನ್ಯಾಸಾಶ್ರಮಂ ಅನ್ನು ಸಹ ಸ್ವೀಕರಿಸಿದ್ದರು. ಅರೈಯರ್ ಆ ಸಮಯದಲ್ಲಿ ಕಾಂಚೀಪುರಂಗೆ ಭೇಟಿ ಮಾಡಿ ಮತ್ತು ಧೇವ ಪೆರುಮಾಳ್ ಮುಂದೆ ಅರೈಯರ್ ಸೇವೆ ಅನ್ನು ನಿರ್ವಹಿಸಲು ಅವಕಾಶ ನೀಡುವಂತೆ ತಿರುಕ್ಕಚಿ ನಂಬಿಗೆ ವಿನಂತಿಸುತ್ತಾರೆ. ಧೇವ ಪೆರುಮಾಳ್ ತನ್ನ ಅರ್ಚಕರ ಮೂಲಕ ಅರೈಯರ್ರನ್ನು ತನ್ನ ಮುಂದೆ ಅರೈಯರ್ ಸೇವೆ ನಿರೂಪಿಸಲು ಕೇಳುತ್ತಾರೆ. ಅರೈಯರ್ ಬಹಳ ಪ್ರೀತಿ ಮತ್ತು ಭಕ್ತಿಯಿಂದ ನೃತ್ಯ ಮತ್ತು ಕ್ರಿಯೆಯೊಂದಿಗೆ ಪಾಸುರಂಗಳನ್ನು ಹಾಡುತ್ತಾರೆ. ಎಂಪೆರುಮಾನ್ ಅತ್ಯಂತ ಸಂತೋಷಗೊಂಡು  ಅವರಿಗೆ ಅನೇಕ ಉಡುಗೊರೆಗಳನ್ನು ನೀಡುತ್ತಾರೆ.ಅರೈಯರ್ ತನಗೆ ಆ ಉಡುಗೊರೆಗಳ ಅಗತ್ಯವಿಲ್ಲ ಎಂದು ಹೇಳಿ ಮತ್ತು ಅವರಿಗೆ ಬೇರೆ ಏನಾದರೂ ಬೇಕು ಎಂದು ಹೇಳುತ್ತಾರೆ. ಎಂಪೆರುಮಾನ್ ಒಪ್ಪುತ್ತಾರೆ ಮತ್ತು ಹೇಳುತ್ತಾರೆ “ನಾನು ಏನು ಬೇಕಾದರೂ ಕೊಡುತ್ತೇನೆ; ಮುಂದುವರಿಯಿರಿ ಮತ್ತು ಕೇಳಿ ”. ಅರೈಯರ್ ನಂತರ ರಾಮಾನುಜರನ್ನು ಸೂಚಿಸುತ್ತಾರೆ ಮತ್ತು ಅವರನ್ನು ಶ್ರೀರಂಗಕ್ಕೆ ಕರೆತರಬೇಕೆಂದು ಬಯಸುವುದಾಗಿ  ಹೇಳುತ್ತಾರೆ.

ಧೇವ ಪೆರುಮಾಳ್ ಹೇಳುತ್ತಾರೆ “ನೀವು ಅವನನ್ನು ಕೇಳುವಿರಿ ಎಂದು ನಾನು ಭಾವಿಸಿರಲಿಲ್ಲ; ಬೇರೆ ಏನನ್ನಾದರೂ ಕೇಳಿ ”. ಅರೈಯರ್ “ನೀವು ಬೇರೆ ಯಾರೂ ಅಲ್ಲ,  ಎರಡು ಮಾತು ಇಲ್ಲದ ಶ್ರೀರಾಮ – ನೀವು ಇನ್ನು ಮುಂದೆ ನಿರಾಕರಿಸಲಾಗುವುದಿಲ್ಲ”. ಧೇವ ಪೆರುಮಾಳ್ ನಂತರ ಅಂತಿಮವಾಗಿ ಒಪ್ಪುತ್ತಾರೆ ಮತ್ತು ರಾಮಾನುಜರಿಗೆ ವಿದಾಯ ನೀಡುತ್ತಾರೆ.

ವ್ಯಾಸ: ಎಂಥಹ ಚಾಣಕ್ಯತೆ ಅಜ್ಜಿ? ಪೆರುಮಾಳನ್ನು ಹೇಗೆ ಮನವರಿಕೆ ಮಾಡುವುದು ಅರೈಯರ್ಗೆ ಚೆನ್ನಾಗಿ ತಿಳಿದಿದೆ.

ಅಜ್ಜಿ: ಹೌದು ವ್ಯಾಸ. ತಕ್ಷಣ, ಅರೈಯರ್ ಅವರು ರಾಮಾನುಜರ್ ಅವರ ಕೈಗಳನ್ನು ಹಿಡಿದುಕೊಂಡು ಶ್ರೀರಂಗಂ ಕಡೆಗೆ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಹೀಗಾಗಿ, ನಮ್ಮ ಸಂಪ್ರದಾಯಂ ಅನ್ನು ದೃಢವಾಗಿ ಸ್ಥಾಪಿಸಲು ಮತ್ತು ಅದನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ರಾಮಾನುಜರ್ ಅವರನ್ನು ಶ್ರೀರಂಗಕ್ಕೆ ಕರೆತರುವ ಮೂಲಕ ಅರೈಯರ್ ಶ್ರೀವೈಷ್ಣವಂಗೆ ಅತ್ಯಂತ ಪ್ರಮುಖವಾದ ಉಪಕಾರ ಮಾಡಿದರು.

ವೇದವಲ್ಲಿ: ಅಜ್ಜಿ, ನೀವು ಪ್ರತಿ ಆಚಾರ್ಯರು ರಾಮಾನುಜರ್ ಅನ್ನು ಕೆಲವು ರೀತಿಯಲ್ಲಿ ಅಚ್ಚೊತ್ತಿದ್ದೀರಿ ಎಂದು ಹೇಳಿದ್ದೀರಿ. ಅರೈಯರ್ ರಾಮಾನುಜರ್ ಅವರಿಗೆ ಏನು ಕಲಿಸಿದರು?

ಅಜ್ಜಿ: ಆಳವಂಧಾರ್ ಅವರು ತಮ್ಮ ಪ್ರತಿಯೊಬ್ಬ ಪ್ರಮುಖ ಶಿಷ್ಯರಿಗೆ ನಮ್ಮ ಸಂಪ್ರದಾಯದ ವಿವಿಧ ಅಂಶಗಳನ್ನು ರಾಮಾನುಜರ್ ಗೆ ಕಲಿಸುವಂತೆ ಸೂಚನೆ ನೀಡಿದರು. ನಮ್ಮ ಸಂಪ್ರದಾಯದ ನಿಜವಾದ ಸಾರವನ್ನು ರಾಮಾನುಜರ್ಗೆ ಕಲಿಸಲು ಅರೈಯರ್ ಅವರನ್ನು ಕೇಳಲಾಯಿತು.ರಾಮಾನುಜರ್ ಅವರು ಅರೈಯರ್ ಬಳಿ ಕಲಿಯಲು  ಹೋಗುವ ಮೊದಲು ಒಂದು ಸುಂದರವಾದ ಕೆಲಸವನ್ನು ಮಾಡುತ್ತಾರೆ. ಅವರು ಏನನ್ನೂ ಕಲಿಯಲು ಹೊರಡುವ ಮೊದಲು 6 ತಿಂಗಳ ಕಾಲ ತನ್ನ ಆಚಾರ್ಯರಿಗೆ (ಅರೈಯರ್) ಕೈಂಕರ್ಯಂ ಮಾಡುತ್ತಾರೆ.ರಾಮಾನುಜರ್ , ಕೂರಥ್ ಆಳ್ವಾನ್, ಮುಧಲಿಯಾಂಡಾನ್ ಮತ್ತು ಇತರ ಅನೇಕ ಆಚಾರ್ಯರು ತಮ್ಮ ಜೀವನದಲ್ಲಿ ಮಾಡಿದ ಒಂದು ಪ್ರಮುಖ ಅಂಶವೆಂದರೆ – ಆಚಾರ್ಯರಿಂದ ಏನನ್ನೂ ಕಲಿಯುವ ಮೊದಲು ಆಚಾರ್ಯರಿಗೆ ಮಾಡಿದ ಕೈಂಕರ್ಯಂ.

ಇದು ಅವರು ಕಲಿಯಲು ಉದ್ದೇಶಿಸಿರುವ ವಿಷಯದ ಬಗ್ಗೆ ಮತ್ತು ಅವರಿಗೆ ಕಲಿಸುವವರ ಮೇಲಿನ ಭಕ್ತಿಯನ್ನು ತೋರಿಸುತ್ತದೆ. ರಾಮಾನುಜರು ಪ್ರತಿದಿನ ಅರೈಯರ್ಗಾಗಿ ಸರಿಯಾದ ಉಷ್ಣತೆಯಲ್ಲಿ ಹಾಲನ್ನು ತಯಾರಿಸುತ್ತಿದ್ದರು ಮತ್ತು ಅಗತ್ಯವಿದ್ದಾಗ  ಅರಿಶಿನ ಲೇಪ ತಯಾರಿಸುತ್ತಿದ್ದರು.

ವ್ಯಾಸ: ಅಜ್ಜಿ, ಇತರ ಆಚಾರ್ಯರು ರಾಮಾನುಜರಿಗೆ ಏನು ಕಲಿಸಿದರು?

ಅಜ್ಜಿ: ಹೌದು, ನಾನು ಅವರ ಬಗ್ಗೆ ಒಂದೊಂದಾಗಿ ಹೇಳುತ್ತೇನೆ. ತಿರುಮಲೈ ನಂಬಿ ರಾಮಾನುಜರ್ ಅವರ ಮಾವ. ಅವರು ತಿರುವೇಂಗಡಂ ಶ್ರೀವೈಷ್ಣವರಲ್ಲಿ ಅಗ್ರಗಣ್ಯರು.ಅವರು ಭಗವಾನ್ ಶ್ರೀನಿವಾಸರಿಗೆ ಕೈಂಕರ್ಯಂ ಮಾಡಿದರು ಮತ್ತು ಪ್ರತಿದಿನ ಆಕಾಶ ಗಂಗಾ (ತಿರುಮಲೈನಲ್ಲಿ ನೀರಿನ ಮೂಲ) ದಿಂದ ತೀರ್ಥಂ (ಪವಿತ್ರ ನೀರು) ಕೈಂಕರ್ಯ ನಿರತರಾಗಿದ್ದರು. ಅವರು ಭಗವಾನ್ ಶ್ರೀನಿವಾಸರಿಗೆ ಬಹಳ ಕಾಳಜಿ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದರು.ಶ್ರೀ ರಾಮಾಯಣಂ ನ ಸಾರ ಮತ್ತು ಸುಂದರವಾದ ಅರ್ಥಗಳನ್ನು ರಾಮಾನುಜರಿಗೆ  ಕಲಿಸಲು ತಿರುಮಲೈ ನಂಬಿಯವರ ಆಚಾರ್ಯ ಆಳವಂದಾರ್ ಅವರ ಸೂಚನೆ ಆಗಿತ್ತು. ಶ್ರೀ ರಾಮಾಯಣಂ ಅನ್ನು ನಮ್ಮ ಸಂಪ್ರದಾಯಂನಲ್ಲಿ ಶರಣಾಗತಿ ಶಾಸ್ತ್ರ ಎಂದು ಕರೆಯಲಾಗುತ್ತದೆ. ತಿರುಮಲೈ ನಂಬಿ, ರಾಮಾನುಜರ ಮಾವನಾಗಿದ್ದರಿಂದ, ಅವರು ಜನಿಸಿದಾಗ ಅವರನ್ನು ಇಳೈಯಾಳ್ವಾರ್ ಎಂದು ಹೆಸರಿಟ್ಟವರು ಅವರೇ.ಅಷ್ಟೇ ಅಲ್ಲ, ತಿರುಮಲೈ ನಂಬಿ ಅವರು ರಾಮಾನುಜರ್ ಅವರ ತಾಯಿಯ ಸೋದರಸಂಬಂಧಿ ಗೋವಿಂದ ಪೆರುಮಾಲ್ ಅನ್ನು ನಮ್ಮ ಸಂಪ್ರದಾಯಕ್ಕೆ ಮರಳಿ ತಂದರು. ನಮ್ಮ ಸಂಪ್ರದಾಯಂ ನಲ್ಲಿನ ಅವರ ಜ್ಞಾನ ಮತ್ತು ಆಳ್ವಾರ್ಗಳ ಪಾಸುರಂ ಮೇಲಿನ ಪ್ರೀತಿ ಸಾಟಿಯಿಲ್ಲದು.

ಪರಾಶರ: ಅಜ್ಜಿ, ತಿರುಮಾಲೈ ಆಂಡಾನ್ ಬಗ್ಗೆ ನೀವು ನಮಗೆ ಹೆಚ್ಚು ಹೇಳಬಲ್ಲಿರಾ? ಅವರು ರಾಮಾನುಜರಿಗೆ  ಹೇಗೆ ಸಹಾಯ ಮಾಡಿದರು?

ಅಜ್ಜಿ: ತಿರುಮಾಲೈ ಆಂಡಾನ್ಗೆ ತಿರುವಾಯ್ಮೊಳಿಯ ಅರ್ಥಗಳನ್ನು ಕಲಿಸುವ ಜವಾಬ್ದಾರಿಯನ್ನು ನೀಡಲಾಯಿತು.

ರಾಮಾನುಜರ್ ಶ್ರೀರಂಗಂಗೆ ಆಗಮಿಸಿದ ನಂತರ, ತಿರುಕ್ಕೋಶ್ಟಿಯೂರ್ ನಂಬಿ ಅವರು ರಾಮಾನುಜರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯ ಶ್ರೇಷ್ಠ ಅರ್ಥಗಳನ್ನು ಕೇಳಲು ಮತ್ತು ಕಲಿಯಲು ತಿರುಮಾಲೈ ಆಂಡಾನ್ ಕಡೆ ಮಾರ್ಗದರ್ಶನ ತೋರುತ್ತಾರೆ.

ಯಾವುದೇ ಮಹಾನ್ ವಿದ್ವಾಂಸರ ನಡುವೆ ಸಂಭವಿಸುವಂತೆ ಆರಂಭದಲ್ಲಿ ಇಬ್ಬರಿಗೂ ಕೆಲವು ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು ಮತ್ತು ರಾಮಾನುಜರ್ ಆಳ್ವಾರುಗಳ ಪಾಸುರಮ್‌ಗಳಲ್ಲಿ ಅಡಗಿರುವ ಸಂಕೀರ್ಣವಾದ ಅರ್ಥಗಳನ್ನು ತನ್ನ ಆಚಾರ್ಯ ತಿರುಮಾಲೈ ಆಂಡಾನ್ ಆಶೀರ್ವಾದದಿಂದ ಕಲಿತರು.ತಿರುಮಾಲೈ ಆಂಡಾನ್ ಅವರ ಆಚಾರ್ಯ ಆಳವಂದಾರ್ ಬಗ್ಗೆ ಅತ್ಯಂತ ಗೌರವ ಮತ್ತು ಭಕ್ತಿ ಹೊಂದಿದ್ದರು. ಅವರು ಎಂದಿಗೂ ತಮ್ಮ ಆಚಾರ್ಯರ ಹಾದಿ ಮತ್ತು ಬೋಧನೆಗಳಿಂದ ದೂರ ಸರಿಯಲಿಲ್ಲ ಮತ್ತು ಕೈಂಕರ್ಯವನ್ನು ನಮ್ಮ ಸಂಪ್ರದಾಯವನ್ನು ಮುಂದೆ ಕೊಂಡೊಯ್ಯುವಂತೆ ಅವರು ರಾಮಾನುಜರ್‌ಗೆ ಕಲಿಸಿದರು.

ವೇದವಲ್ಲಿ: ಮತ್ತು ತಿರುಕ್ಕೋಷ್ಟಿಯೂರ್ ನಂಬಿ ಮತ್ತು ತಿರುಕ್ಕಚ್ಚಿ ನಂಬಿ ಬಗ್ಗೆ ಏನು?

ಅಜ್ಜಿ: ನಾವು ಮುಂದಿನ ಬಾರಿ ಭೇಟಿಯಾದಾಗ ಅವರ ಬಗ್ಗೆ ಹೇಳುತ್ತೇನೆ. ಅವರ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳಿವೆ.

ವ್ಯಾಸ, ಪರಾಶರ ಮತ್ತು ವೇದವಲ್ಲಿ : ಈಗ ಕಥೆಗಳನ್ನು ಹೇಳಿ ಅಜ್ಜಿ.

ಅಜ್ಜಿ: ಇಂದು ತಡವಾಗುತ್ತಿದೆ. ಇದು ಇಂದಿನವರೆಗೆ ಸಾಕು. ಈಗ ಮನೆಗೆ ಹೋಗಿ ನಾಳೆ ಹಿಂತಿರುಗಿ ಮತ್ತು ನಿಮ್ಮ ಸ್ನೇಹಿತರನ್ನು ನಿಮ್ಮೊಂದಿಗೆ ಕರೆತರಲು ಮರೆಯಬೇಡಿ.

ಮಕ್ಕಳು ಆಚಾರ್ಯರ ಬಗ್ಗೆ ಯೋಚಿಸುತ್ತಾ ತಮ್ಮ ಮನೆಗಳಿಗೆ ತೆರಳುತ್ತಾರೆ ಮತ್ತು ಮರುದಿನ ಅಜ್ಜಿ ಹೇಳುವ ಕಥೆಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2016/07/beginners-guide-alavandhars-sishyas-1/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


Leave a Comment